ಬೆಂಗಳೂರು:ಅ-9:(www.justkannada.in) ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ಆನೆಯೊಂದು ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ರೌಡಿ ರಂಗ ಎಂದೇ ಆನೆಯನ್ನು ಮೂರುವರ್ಷಗಳ ಹಿಂದೆ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ಆನೆ ಶಿಬಿರಕ್ಕೆ ತರಲಾಗಿತ್ತು.
ತಡರಾತ್ರಿ ಕೇರಳದ ಕಣ್ಣೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಶಿಬಿರದ ಆವರಣದಲ್ಲಿ ಮೇಯಲು ಬಿಟ್ಟಿದ್ದ ರಂಗ ಆನೆ( 46)ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆನೆಯ ಸೊಂಟದ ಮೂಳೆ ಮುರಿದುಕೊಂಡಿದ್ದು, ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ರಂಗನಿಗೆ ಪಶು ವೈದ್ಯ ಡಾ. ಮುಜೀಬ್ ಚಿಕಿತ್ಸೆ ನೀಡಿದ್ದರು. ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ಮತ್ತಿಗೋಡು ಆನೆ ಶಿಬಿರದ ಬಳಿಈ ಘಟನೆ ನಡೆದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಂಗ ಸಾವನ್ನಪ್ಪಿದ್ದಾನೆ.
ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷಗಳ ಹಿಂದೆ ಬೆಂಗಳೂರಿನ ಸಮೀಪದ ಅರಣ್ಯ ಪ್ರದೇಶಗಳಲ್ಲಿ ದಾಂಧಲೆ ನಡೆಸುತ್ತಿದ್ದ ರಂಗನನ್ನು ಅಭಿಮನ್ಯು ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಮತ್ತಿಗೋಡು ಕ್ಯಾಂಪ್ನಲ್ಲಿ ಪಳಗಿಸಲಾಗಿತ್ತು. ಶಿಬಿರದಲ್ಲಿ ರೌಡಿ ಎಂದೇ ಖ್ಯಾತಿ ಪಡೆದಿದ್ದ ಈ ಆನೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳಲು ರಂಗನ ಕಾವಾಡಿ ಸಿದ್ಧತೆ ನಡೆಸಿದ್ದ. ಆದರೆ ಈಗ ರಂಗ ಸಾವನ್ನಪ್ಪಿದ್ದರಿಂದ ಈಡೀ ಶಿಬಿರ ದು:ಖತಪ್ತವಾಗಿದೆ.
ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ರಂಗ ಆನೆ ಸಾವು
46-year-old elephant, Rowdy Ranga, from Mathigodu elephant camp dies; forest dept wants more vets in sensitive zones
The post ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ರಂಗ ಆನೆ ಸಾವು appeared first on Just Kannada - Online Kannada News.