ಮೈಸೂರು,ಅ,9,2018(www.justkannada.in): ಕುವೆಂಪು ನಗರ ಬಸ್ ನಿಲ್ದಾಣದಿಂದ ಅರವಿಂದ ನಗರದ ಮೂಲಕ ಶ್ರೀರಾಂಪುರದ ನಾಯ್ಡು ಸ್ಟೋರ್ ವರೆಗೆ ಹಾದು ಹೋಗಿರುವ ಹೈ ಟೆನ್ಷನ್ ಲೈನ್ ಮಾರ್ಗದ ನಡುವೆ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ವಾಯುವಿಹಾರ ಮಾಡುವವರಿಗೆಂದು ವಾಕಿಂಗ್ ಪಾತ್ ನಿರ್ಮಿಸುವ ಜೊತೆಗೆ ಅವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಆದರೆ ಅಪಾಯಕಾರಿ ಹೈಟೆನ್ಷನ್ ತಂತಿಗಳ ಕೆಳಗೆ ಸಾರ್ವಜನಿಕರು ವಾಯು ವಿಹಾರ ಮಾಡಿ ವಿಶ್ರಾಂತಿ ಪಡೆಯುವುದು ಕ್ಷೇಮಕರವೇ? ಖಂಡಿತಾ ಅಲ್ಲ. ಹೈಟೆನ್ಷನ್ ತಂತಿಯ ಕೆಳಗೆ ಓಡಾಡುವುದೂ ಸಹ ಅಪಾಯಕಾರಿ. ಈ ಸ್ಥಳವು ಸಾರ್ವಜನಿಕರು ಓಡಾಡಲು ನಿಷೇಧಿತ ಪ್ರದೇಶ. ಇಂತಹ ಪ್ರದೇಶವು ಕೆ ಪಿ ಟಿ ಸಿ ಎಲ್ ಸಂಸ್ಥೆಗೆ ಸೇರಿದ ಜಾಗವಾಗಿರುತ್ತದೆ.
ಈ ಸ್ಥಳದಲ್ಲಿ ವಾಯು ವಿಹಾರ ಮಾಡಲು ವಾಕಿಂಗ್ ಪಾತ್ ಹಾಗೂ ಸಿಮೆಂಟ್ ಬೆಂಚುಗಳನ್ನು ಅಳವಡಿಸುತ್ತಿರುವವರಾರು?ಕೆ ಪಿ ಟಿ ಸಿ ಎಲ್ ಸಂಸ್ಥೆಯೋ, ಮೈಸೂರು ಮಹಾ ನಗರ ಪಾಲಿಕೆಯೋ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೋ? ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹ ಕೇಳಿ ಬಂದಿದೆ.
ಲೇಖನ..
ಪಿಜೆ ರಾಘವೇಂದ್ರ
ವಕೀಲರು, ಮೈಸೂರು
Key words: park -between -high tension line-Mysore DC-take action- requested
The post ಹೈ ಟೆನ್ಷನ್ ಲೈನ್ ಮಾರ್ಗದ ನಡುವೆ ಉದ್ಯಾನವನ : ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು ಮೈಸೂರು ಜಿಲ್ಲಾಧಿಕಾರಿಗೆ ಆಗ್ರಹ appeared first on Just Kannada - Online Kannada News.