ಮೈಸೂರು,ಅ,10,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಇಂದು ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಉದ್ಘಾಟಿಸಿದರು. ಈ ನಡುವೆ ರಾಜ್ಯದಲ್ಲಿ ದೋಸ್ತಿ ಸರ್ಕಾರದ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ ಎಂಬುದಕ್ಕೆ ಇಲ್ಲೊಂದು ಪ್ರಸಂಗ ಸಾಕ್ಷಿಯಾಗಿದೆ.
ಮೈಸೂರಿನ ದಸರಾ ವಿಚಾರದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಹೌದು, ಇಂದು ನಡೆದ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಗೈರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರೇ ದೂರ ಉಳಿದಿರುವುದು ಹಲವು ಅನುಮಾನ ಉಂಟು ಮಾಡಿದೆ.
ಮೈಸೂರು ಕಾಂಗ್ರೆಸ್ ಶಾಸಕರಾದ ವರುಣಾ ಕ್ಷೇತ್ರದ ಡಾ.ಯತೀಂದ್ರ ಸಿದ್ದರಾಮಯ್ಯ, ನರಸಿಂಹ ವಿಧಾನಸಭಾ ಕ್ಷೇತ್ರದ ತನ್ವೀರ್ ಸೇಠ್, ಹೆಚ್.ಡಿ.ಕೋಟೆ ಕ್ಷೇತ್ರದ ಅನಿಲ್ ಚಿಕ್ಕಮಾದು, ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ಮೈಸೂರು ದಸರಾ ಉದ್ಘಾಟನೆಗೆ ಗೈರಾಗಿದ್ದರು. ಡಿಸಿಎಂ ಡಾ.ಜಿ ಪರಮೇಶ್ವರ್ ಸಹ ಆಗಮಿಸಿರಲಿಲ್ಲ. ಇನ್ನು ಆರಂಭದಲ್ಲೇ ಅಪಸ್ವರ ಎತ್ತಿದ್ದ ಸಚಿವ ಪುಟ್ಟರಂಗಶೆಟ್ಟಿ ಸಹ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ ಹೊರತು ಪಡಿಸಿ ಯಾವ ಕಾಂಗ್ರೆಸ್ ನಾಯಕರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಈ ಕಾರ್ಯಕ್ರಮ ಜೆಡಿಎಸ್ ಜಾತ್ರೆಯಾಗಿ ಮಾರ್ಪಟ್ಟಿತ್ತು. ಎರಡು ಭಾರಿ ದಸರಾ ಕಾರ್ಯಕಾರಣಿ ಸಭೆಗೆ ಕಾಂಗ್ರೆಸ್ ಜನಪ್ರಯಿನಿಧಿಗಳು ಗೈರಾಗಿದ್ದರು. .
ಮೇಯರ್ ಇಲ್ಲದೆ 2018 ರ ದಸರಾ ಮಹೋತ್ಸವ ಉದ್ಘಾಟನೆ….
ಮೈಸೂರು ಪಾಲಿಕೆ ಮೇಯರ್ ಆಯ್ಕೆಯಾಗದ ಹಿನ್ನೆಲೆ. ಮೇಯರ್ ಇಲ್ಲದೆ 2018 ರ ದಸರಾ ಮಹೋತ್ಸವ ಉದ್ಘಾಟನೆ ಮಾಡಲಾಯಿತು. ಈ ಹಿಂದೆಯೂ ಕೂಡ ಮೇಯರ್ ಅನುಪಸ್ಥಿತಿಯಲ್ಲಿ ಎರಡು ಭಾರಿ ಮೇಯರ್ ಇಲ್ಲದೆ ದಸರಾ ಉದ್ಘಾಟನೆ ನಾಡಲಾಗಿತ್ತು. 1995 ಮತ್ತು 2013 ರಲ್ಲಿ ಮೇಯರ್ ಇಲ್ಲದೆ ದಸರಾ ಆಚರಣೆ ಮಾಡಲಾಗಿತ್ತು.
Key words: Remaining- Congress leaders -inauguration – Mysore Dasara.
The post ಮೈಸೂರು ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು… appeared first on Just Kannada - Online Kannada News.